Stuti Ratnamala | Bhanu Koti Teja Lavanya Moorthy Song Lyrics in Kannada

See below for Stuti Ratnamala Lyrics in Kannada, and Bhanu Koti Teja Lavanya Moorthy Song Lyrics in Kannada.

Stuthi Ratnamala is a wonderful haridasa Keerthana on Lord Venkatesha composed by Sri Shrishavittala dasaru. This is a very famous and most chanted Stotram or Song in Sravana Masam by Madhvas. Doing pooja to Lord Srinivasa with Tambittu Deepa (Rice flour Lamp) and Singing this song gives wonderful results in Life. 

Stuti Ratnamala | Bhanu Koti Teja Lavanya Moorthy Song Lyrics in Kannada

Click here for Sri Venkatesha Stotram

Check 2022 Tirumala Brahmotsavam Dates and Schedule here

Stuti Ratnamala | Bhanu Koti Teja Lavanya Moorthy Song Lyrics in Kannada

ಭಾನುಕೋಟಿ ತೇಜ ಲಾವಣ್ಯ ಮೂರುತಿ

ಶ್ರೀ ವೇಂಕಟೇಶನೇ ನಮೋನಮೋ ಶ್ರೀನಿವಾಸ ದಯಾನಿಧೆ || 1 ||


ಶೇಷಾಚಲನಿವಾಸ ದೋಷದೂರನೆ ಭಕ್ತಪೋ–

ಷಕ ಶ್ರೀಕಾಂತ, ನಮೋನಮೋ ಶ್ರೀನಿವಾಸ ದಯಾನಿಧೆ || 2||


ನೀಲಮೇಘಶ್ಯಾಮ ಪಾಲಸಾಗರಶಯನ ಶ್ರೀ–

ಲಕುಮೀಶನೆ ನಮೋನಮೋ ಶ್ರೀನಿವಾಸ ದಯಾನಿಧೆ || 3 ||


ಖಗರಾಜವಾಹನ ಜಗದೊಡೆಯನೆ ನಿನ್ನ 

ಅಗಣಿತ ಮಹಿಮಗೆ ನಮೋನಮೋ ಶ್ರೀನಿವಾಸ ದಯಾನಿಧೆ || 4 ||


ಶಂಖಚಕ್ರಧರ ವೇಂಕಟರಮಣ ಅಕ–

ಳಂಕ ಮೂರುತಿ ದೇವ ನಮೋನಮೋ ಶ್ರೀನಿವಾಸ ದಯಾನಿಧೆ || 5||


ಪನ್ನಂಗಶಯನನೆ ನಿನ್ನಂತ ದೇವರು 

ಇನ್ನುಂಟೆ ಅಜಭವಸುರವಂದ್ಯ ಶ್ರೀನಿವಾಸ ದಯಾನಿಧೆ || 6||


ಸೃಷ್ಟಿ ಇಲ್ಲದಲೆ ಒತ್ತಟ್ಟಿಗಿದ್ದವರನ್ನು

ಸೃಷ್ಟಿಸಿ ಜೀವರಸಲಹುವಿ ಶ್ರೀನಿವಾಸ ದಯಾನಿಧೆ || 7||


ತನಮನಕರಣಗಳನು ಕೊಟ್ಟು ಅನಿಮಿಷರ–

ನು ಅಭಿಮಾನಿಗಳೆನಿಸಿದೀ ಶ್ರೀನಿವಾಸ ದಯಾನಿಧೆ||8||


ದೀನವತ್ಸಲ ನಿನ್ನಾಧೀನದೊಳಗಿಟ್ಟು

ಜ್ಞಾನ ಕರ್ಮಗಳ ಮಾಡಿಸುವಿಯೋ ಶ್ರೀನಿವಾಸ ದಯಾನಿಧೆ ||9||


ಕ್ಷಣ ಬಿಡದೆಲೆ ಭಕ್ತಜನರ ರಕ್ಷಿಸುವಿ ದು–

ರ್ಜನರಿಗೆ ದುರ್ಲಭನೆನಿಸುವೀ ಶ್ರೀನಿವಾಸ ದಯಾನಿಧೆ ||10||


ವೈಷಮ್ಯ ನೈರ್ಘ್ರುಣ್ಯ ಲೇಶವಿಲ್ಲವರು 

ಉಪಾಸನದಂತೆ ಫಲಗಳೀವಿ ಶ್ರೀನಿವಾಸ ದಯಾನಿಧೆ ||11||


ಒಂದೇ ರೂಪದಿ ಬಹುಮಂದಿಯೊಳಗಿದ್ದು 

ಬಂಧಮೋಕ್ಷಪ್ರಧ ಎನಿಸುವೀ ಶ್ರೀನಿವಾಸ ದಯಾನಿಧೆ ||12||


ಜ್ಞಾನಿಗಳರಸ ಅಜ್ಞಾನಿಗಳೊಳು ನಾ ಅ–

ಜ್ಞಾನಿ ಸುಜ್ಞಾನವ ಪಾಲಿಸೋ ಶ್ರೀನಿವಾಸ ದಯಾನಿಧೆ ||13||


ನಂಬಿದೆ ನಾ ನಿನ್ನ ಬಿಂಬ ಮೂರುತಿ ಎನ್ನ

ಡಿಂಬದೊಳಗೆ ಪೊಳೆ ಅನುದಿನ ಶ್ರೀನಿವಾಸ ದಯಾನಿಧೆ ||14||


ನಿನ್ನ ಹೊರತು ಎನಗೆ ಅನ್ಯರಿಂದೇನಯ್ಯ

ನಿನ್ನ ಸ್ತುತಿಪ ಸುಖಕ್ಕೆ ಎಣೆಗಾಣೇ ಶ್ರೀನಿವಾಸ ದಯಾನಿಧೆ ||15||


ಘನ್ನ ಮಹಿಮ ಎನಗಿನ್ನೊಂದು ಬಯಕಿಲ್ಲ

ನಿನ್ನ ಧ್ಯಾನದೊಳಿದು ಮರಿಯದೇ ಶ್ರೀನಿವಾಸ ದಯಾನಿಧೆ ||16||


ದುರ್ಜನ ಸಂಗ ವಿವರ್ಜ ಮಾಡಿಸಿ ಸಾಧು 

ಸಜ್ಜನರ ಸೇವೆಯೊಳಗಿಡೊ ಶ್ರೀನಿವಾಸ ದಯಾನಿಧೆ ||17||


ಏಸು ಜನ್ಮಗಳೀಯೆ ಲೇಸು ಚಿಂತೆಯು ಇಲ್ಲ

ದಾಸನೆಂದೆನಿಸೋ ದಾಸ್ಯವನಿತ್ತು ಶ್ರೀನಿವಾಸ ದಯಾನಿಧೆ ||18||


ಎನ್ನಪ್ಪ ಎನ್ನಣ್ಣ ಎನ್ನ ಕಾಯುವ ದೇವ

ನಿನ್ನ ವಿಸ್ಮರಣೆಯ ಕೊಡದಿರೋ ಶ್ರೀನಿವಾಸ ದಯಾನಿಧೆ ||19||


ಮನಸಿನ ಚಂಚಲವನ್ನು ತೊಲಗಿಸಿ ಪಾದ

ವನಜದಲ್ಲಿರಿಸಯ್ಯ ಜಿತವಾಗಿ ಶ್ರೀನಿವಾಸ ದಯಾನಿಧೆ||20||


ಕರಣಗಳಿಂದ ಆಚರಿಸುವ ವಿಷಯ ಶ್ರೀ

ಹರಿ ನಿನ್ನ ಸೇವೆಯಾಗಲಿ ಸ್ವಾಮಿ ಶ್ರೀನಿವಾಸ ದಯಾನಿಧೆ ||21||


ಬುಧ್ಧಿಪೂರ್ವಕ ಗುರು ಮಧ್ವಮತವ ತಿಳಿ

ದಿದ್ದವನೆ ಜ್ಞಾನವೃಧ್ಧನೋ ಶ್ರೀನಿವಾಸ ದಯಾನಿಧೆ ||22||


ಹರಿಯೇ ಸರ್ವೋತ್ತಮ ಸುರರೆಲ್ಲ ದಾಸರು

ತಾರತಮ್ಯ ಭೇಧ ಜ್ಞಾನವನೀಯೋ ಶ್ರೀನಿವಾಸ ದಯಾನಿಧೆ ||23||


ಗುರುಗಳ ಕರುಣ ಸುಸ್ಥಿರವಾಗಿದ್ದವರಿಗೆ 

ಹರಿ ನಿನ್ನ ಅನುಗ್ರಹವಾಗುವುದೋ ಶ್ರೀನಿವಾಸ ದಯಾನಿಧೆ ||24||


ನಿನ್ನವರಲ್ಲದೆ ಅನ್ಯರು ಬಲ್ಲರೆ

ಘನ್ನಮತದ ಸುಖ ಸವಿಯನ್ನೂ ಶ್ರೀನಿವಾಸ ದಯಾನಿಧೆ ||25||


ನಿನ್ನ ಚಿತ್ತಕೆ ಬಂದುದೆನ್ನ ಚಿತ್ತಕೆ ಬರಲಿ

ಅನ್ಯಥಾ ಬಯಕೆಯ ಕೊಡದಿರೋ ಶ್ರೀನಿವಾಸ ದಯಾನಿಧೆ ||26||


ಸ್ಥುತಿರತ್ನಮಾಲಾ ಸಂಸ್ತುತಿಸಿ ಹಿಗ್ಗುವರಿಗೆ

ಪ್ರತಿದಿನ ಸುಖ ಅಭಿವೃಧ್ಧಿಯೋ ಶ್ರೀನಿವಾಸ ದಯಾನಿಧೆ ||27||


ಗುರುಗಳು ಮಧ್ವರಾಯರು ಮೂರು ಲೋಕಕ್ಕೆ ದೊರೆ

ಗುರು ಶ್ರೀಶವಿಟಲ ನಮೋ ಶ್ರೀನಿವಾಸ ದಯಾನಿಧೆ ||28||

Comments

Popular posts from this blog

Sri Subrahmanya Ashtottara Shatanamavali in Telugu Lyrics Online free

Sri Vishnu Sahasranama Stotram in Telugu Lyrics

Sri Subrahmanya Ashtottara Shatanamavali in Kannada